Tuesday, September 7, 2010

ಆಳ್ವಾಸ್ ನುಡಿಸಿರಿ ೨೦೧೦

ಮೂಡಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡು ನುಡಿಯ 7ನೇ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್‌ ನುಡಿಸಿರಿ- 2010' ಅಕ್ಟೋಬರ್‌ 29, 30 ಮತ್ತು 31ರಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ> ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

2004ರಿಂದ ವೊದಲ್ಗೊಂಡು 'ಕನ್ನಡ ಮನಸ್ಸು' ಕೇಂದ್ರಿತವಾಗಿ ಸಾಹಿತ್ಯಕ-ಸಾಂಸ್ಕೃತಿಕ ಸವಾಲುಗಳು, ಬೌದ್ಧಿಕ ಸ್ವಾತಂತ್ರ್ಯ, ಪ್ರಚಲಿತ ಪ್ರಶ್ನೆಗಳು, ಸಾಹಿತಿಯ ಜವಾಬ್ದಾರಿಗಳು, ಶಕ್ತಿ ಮತ್ತು ವ್ಯಾಪ್ತಿ, ಸಮನ್ವಯದೆಡೆಗೆ ಎಂಬ ಪರಿಕಲ್ಪನೆಗಳಲ್ಲಿ ನುಡಿಸಿರಿ ಸಮ್ಮೇಳನಗಳು ನಡೆದಿದ್ದು ಈ ಬಾರಿ 'ಕನ್ನಡ ಮನಸ್ಸು: ಜೀವನ ಮೌಲ್ಯ' ಎಂಬ ಪರಿಕಲ್ಪನೆಯಲ್ಲಿ ಸಮ್ಮೇಳನ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ನಾಡಿನ 10 ಮಂದಿ ಸಾಧಕರನ್ನು 'ನುಡಿಸಿರಿ ಪ್ರಶಸ್ತಿ' ನೀಡಿ ಪುರಸ್ಕರಿಸಲಾಗುವುದು ಎಂದು ಡಾ> ಆಳ್ವ ತಿಳಿಸಿದರು.

No comments: